BIG NEWS : ಕೆರೆಯಲ್ಲಿ ಬಿದ್ದು (16) ವರ್ಷದ ಷಬಾಲಕ ಸಾವು…!
ಲಕ್ಷ್ಮೇಶ್ವರ: ಯಳವತ್ತಿ ಗ್ರಾಮದ ಗುಂಡೆಶ್ವರ ಕೆರೆಯಲ್ಲಿ ಎತ್ತು ಮೈ ತೊಳೆಯಲು ಹೋದಾಗ ಗ್ರಾಮದ ದೇವೇಂದ್ರ ರುದ್ರಗೌಡ ರಾಚನಗೌಡ್ರು ಎಂಬ (16 ) ವರ್ಷದ ಯುವಕ ಮೃತಪಟ್ಟ ಘಟನೆ ನಡೆದಿದೆ.
ಘಟನೆ ವಿವರ ಬಾಲಕ ಹೊಲದಿಂದ ಮನೆಗೆ ಬರುವಾಗ ಕೆರೆಯಲ್ಲಿ ಎತ್ತು ಮೈ ತೊಳೆಯಬೇಕೆಂದು ಕೆರೆಗೆ ಹೋಗಿದ್ದಾನೆ ಕೆರೆಯಲ್ಲಿ ಎತ್ತು ಮೈ ತೊಳೆಯುವಾಗ ಬಾಲಕ ಕಾಣದಂತದಾಗ ಗ್ರಾಮಸ್ಥರಿಗೆ ಗೊತ್ತಾಗಿದೆ ಇದರಿಂದ ಗ್ರಾಮಸ್ಥರು ಕೆರೆಯಲ್ಲಿ ಬಾಲಕನನ್ನು ಹುಡುಕಲು ಪ್ರಾರಂಭಿಸಿದ್ದಾರೆ ಹಾಗೂ ಅಗ್ನಿಶಾಮಕ ಸಿಬ್ಬಂದಿಗೂ ಸಹ ವಿಷಯ ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಕೆರೆಯಲ್ಲಿ ಬಾಲಕನ ಹುಡುಕಾಟದ ಕಾರ್ಯ ನಡೆಸಿದ್ದಾರೆ ಕಡೆಗೂ ಬಾಲಕ ಹೆಣವಾಗಿ ಪತ್ತೆಯಾಗಿದ್ದಾನೆ ಬಾಲಕನ ಸಾವು ಕಂಡ ಮನೆಯರ ಅಕ್ರದನ ಮುಗಿಲು ಮುಟ್ಟುವಂತಿತ್ತು ಘಟನಾ ಸ್ಥಳಕ್ಕೆ ತಹಸೀಲ್ದಾರ್ ವಾಸುದೇವ ವ್ಹಿ ಸ್ವಾಮಿ ತಾಲೂಕು ಪಂಚಾಯಿತಿ ಇ.ಒ. ಕೃಷ್ಣಪ್ಪ ಧರ್ಮರ ಅವರು ಭೇಟಿ ನೀಡಿದ್ದಾರೆ.