BIG NEWS : ರಾಜ್ಯದಲ್ಲಿ ಎಸಿ/ಎಸ್ಟಿಗಳಿಗಾಗಿ ಪ್ರತ್ಯೆಕ 33 ಪೊಲೀಸ್ ಠಾಣೆ ಏ.14ರಿಂದ ಕಾರ್ಯಾರಂಭ!
ಬೆಂಗಳೂರು : ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ವಿಚಾರಿಸಲು ಪ್ರತ್ಯೇಕವಾಗಿ ರಾಜ್ಯ ಸರ್ಕಾರ 33 ಪೊಲೀಸ್ ಠಾಣೆಗಳನ್ನು ಏಪ್ರಿಲ್ 14 ರಂದು ಅಂಬೇಡ್ಕರ್ ಜಯಂತಿಯಂದು ಕಾರ್ಯಾರಂಭ ಮಾಡಲಿದೆ’ ಎಂದು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
‘ಕರ್ನಾಟಕದಲ್ಲಿ ಎಸ್ಸಿ / ಎಸ್ಟಿ ದೌರ್ಜನ್ಯ ಪ್ರಕರಣಗಳಲ್ಲಿ ಕಡಿಮೆ ಶಿಕ್ಷೆಯ ಪ್ರಮಾಣವನ್ನು ಎದುರಿಸುತ್ತಿರುವ ಸಮಯದಲ್ಲಿ ಪ್ರಕರಣಗಳ ತನಿಖೆ ನಡೆಸಲು ಈ ಠಾಣೆಗಳು ಅನುವು ಮಾಡಿಕೊಡುತ್ತದೆ. ಇದು ದಲಿತರ ಹಕ್ಕುಗಳ ರಕ್ಷಣೆಗಾಗಿ ಮಂತ್ರಿಮಂಡಲದಲ್ಲಿ ಐತಿಹಾಸಿಕ ನಿರ್ಧಾರವಾಗಿದೆ’ ಎಂದು ಅವರು ಹೇಳಿದರು.