LOCAL NEWS : ಮುಂಡರಗಿ ಸಿಪಿಐ ಮಂಜುನಾಥ್ ಕುಸುಗಲ್ ಅವರಿಗೆ ಮುಖ್ಯಮಂತ್ರಿ ಪದಕ : ಸಂಘಟನೆಗಳಿಂದ ಸನ್ಮಾನ!!
ಮುಂಡರಗಿ : ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಸಿಪಿಐ ಮಂಜುನಾಥ್ ಕುಸುಕಲ್ ಅವರಿಗೆ 2024ನೇ ಸಾಲಿನ ಅತ್ಯುತ್ತಮ ದಕ್ಷ ಅಧಿಕಾರಿ ಎಂದು ಮುಖ್ಯಮಂತ್ರಿಗಳಿಂದ ಪದಕ ದೊರೆತಿದೆ.
ಈ ಹಿನ್ನೆಲೆಯಲ್ಲಿ ಮುಂಡರಗಿ ಕೋಟೆ ಭಾಗದ ಗುರು ಹಿರಿಯರು ಮತ್ತು ದುರ್ಗಾ ದೇವಿ ಕಮಿಟಿ ಸದಸ್ಯರು ಮತ್ತು ಆಂಜನೇಯ ಕಮಿಟಿ ಸದಸ್ಯರು ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ವತಿಯಿಂದ ಸಿಪಿಐ ಅವರಿಗೆ ಸನ್ಮಾನಿಸಿ ಗೌರವಿಸಿದರು.