LOCAL NEWS : ಭಗೀರಥ ಜಯಂತಿ: ಪೂರ್ವಭಾವಿ ಸಭೆ

You are currently viewing LOCAL NEWS : ಭಗೀರಥ ಜಯಂತಿ: ಪೂರ್ವಭಾವಿ ಸಭೆ

LOCAL NEWS : ಭಗೀರಥ ಜಯಂತಿ: ಪೂರ್ವಭಾವಿ ಸಭೆ

ಕುಕನೂರು  : ಕುಕನೂರು ತಹಸಿಲ್ದಾರರ ಕಾರ್ಯಾಲಯದಲ್ಲಿ ಶ್ರೀಭಗೀರಥ ಜಯಂತಿ ಆಚರಣೆ ಕುರಿತು ಪೂರ್ವಭಾವಿ ಸಭೆಯನ್ನು ಆಯೋಜಿಸಲಾಯಿತು.

ಮೇ 4ರಂದು ಆಚರಿಸಲ್ಪಡುವ ಶ್ರೀ ಭಗೀರಥ ಜಯಂತಿಯ ಆಚರಣೆಯ ಕುರಿತು ಪೂರ್ವಭಾವಿ ಸಿದ್ಧತಾ ಸಭೆಯನ್ನು ಉದ್ದೇಶಿಸಿ ಕುಕನೂರು ತಾಲೂಕ ಗ್ರೇಡ್ 2 ತಹಸಿಲ್ದಾರ ಮುರಳಿದ ರಾವ್ ಕುಲಕರ್ಣಿ ಮಾತನಾಡಿ ಮಹನೀಯರು ಹಾಕಿಕೊಟ್ಟ ಮಾರ್ಗ ನಮಗೆ ಅತ್ಯಂತ ಅವಶ್ಯಕವಾಗಿದ್ದು ಅವರ ಮಾರ್ಗದರ್ಶನದಲ್ಲಿ ಹೆಜ್ಜೆ ಹಾಕುತ್ತ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ. ಹಾಗೂ ತಾಲೂಕಿನ ಅತ್ಯಂತ ಎಲ್ಲಾ ಶಾಲಾ ಕಾಲೇಜು ಹಾಗು ಸರ್ಕಾರಿ ಕಾರ್ಯಾಲಯಗಳಲ್ಲಿ ಸಕಲ ಗೌರವದೊಂದಿಗೆ ಮಹನೀಯರ ಜಯಂತಿ ಆಚರಣೆಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಭಗೀರಥ ಸಮಾಜದ ಪ್ರಮುಖರಾದ ಹನುಮಂತಪ್ಪ ಉಪ್ಪಾರ ಮಂಡಲಗಿರಿ ಮಾತನಾಡುತ್ತ ಮೇ 4ರಂದು ಭಗಿರಥ ಜಯಂತಿಯನ್ನು ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಲ್ಲಿ ಹಾಗೂ ಭಗೀರಥ ವೃತ್ತದಲ್ಲಿ ಸಾಂಕೇತಿಕವಾಗಿ ಆಚರಣೆ ಮಾಡಿ ಎಲ್ಲಾ ಪ್ರಮುಖರೊಂದಿಗೆ ಚರ್ಚಿಸಿ ನಿರ್ಣಯ ತೆಗೆದುಕೊಂಡು ನಂತರದ ದಿನದಲ್ಲಿ ಅದ್ದೂರಿಯಾಗಿ ಭಗೀರಥ ಜಯಂತಿ ಆಚರಣೆ ಮಾಡುವುದಾಗಿ ತಿಳಿಸಿದರು.

ಈ ಸಭೆಯಲ್ಲಿ ತಾಲೂಕ ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಪ್ರಮುಖರಾದ ಗವಿಸಿದ್ದಪ್ಪ ಲೇಬಗಿರಿ, ಶರಣಪ್ಪ ದೇವರಮನಿ, ಗೋಣೆಪ್ಪ ಹಿರೇಮನಿ, ಈರಪ್ಪ ಗುಡಿಹಿಂದಲ, ಗವಿಸಿದ್ದಮ್ಮ ಕೋನಾಪುರ ಹಾಗೂ ಇನ್ನಿತರರು ತಿಳ್ಕೊಂಡಿದ್ದರು

Leave a Reply

error: Content is protected !!