ಕುಕನೂರು : ತಾಲೂಕಿನ ಕದ್ರಳ್ಳಿ ಗ್ರಾಮದ ಲಕ್ಷ್ಮವ್ವ ಶೇಖರಪ್ಪ ಉಪ್ಪಾರ (೭೫) ನಾಲ್ಕು ದಿನಗಳ ಹಿಂದೆ ತಮ್ಮ ಹೊಲದಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿತ್ತು, ಊರಲ್ಲಿ ಪ್ರತಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳಕ್ಕೆ ಹಾಗೂ ಅಲ್ಲಿದಿಂದ ಧಾರವಾಡದ ಎಸ್.ಡಿ.ಎಮ್. ಆಸ್ಪತ್ರೆಗೆ ಕರೆದೋಯಲಾಯಿತು ಆದರೆ ಅಲ್ಲಿಯೂ ಸಹ ಚಿಕಿತ್ಸೆ ಫಲಕರಿಯಾಗದೆ ಮನೆಗೆ ವಾಪಾಸ್ಸ ಆಗದ ಮನೆಯಲ್ಲಿಯೇ ಸಾವನ್ನೊಪ್ಪಿರುವ ಘಟನೆ ಜರುಗಿದೆ. ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ ಮಂಗಳೂರು ಹೋಬಳಿ ಕಂದಾಯ ನೀರಿಕ್ಷಕರು ವರದಿ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.
ಮೃತರಿಗೆ ಇಬ್ಬರು ಗಂಡು ಮಕ್ಕಳುˌ ನಾಲ್ವರು ಹೆಣ್ಣು ಮಕ್ಕಳು ಮೊಮ್ಮಕ್ಕಳು ಅಪಾರ ಬಂಧು ಬಳಗವನ್ನು ಇದ್ದರು.