ಆಂಧ್ರ ಪ್ರದೇಶ : ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) (ISRO – Indian Space Research Organisation) ವಿಜ್ಞಾನಿಗಳ ತಂಡವು ಪ್ರಾರ್ಥನೆ ಸಲ್ಲಿಸಲು ಚಂದ್ರಯಾನ-3 ರ ಕ್ಷೀಪಣಿ ಮಾದರಿಯೊಂದಿಗೆ ತಿರುಪತಿ ವೆಂಕಟೇಶ್ವರ್ ದೇವಸ್ಥಾನಕ್ಕೆ ಆಗಮಿಸಿದ್ದಾರೆ.
ಚಂದ್ರಯಾನ-3 ನಾಳೆ (ಜುಲೈ 14 ರಂದು) ಮಧ್ಯಾಹ್ನ 2:35 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿದೆ ಎಂದು ಇಸ್ರೋ ಈಗಾಗಲೇ ಘೋಷಿಸಿದೆ.