ರಾಜ್ಯದ ಕರಾವಳಿ ಹಾಗೂ ಉತ್ತರ ಒಳನಾಡಿನ ಭಾಗಗಲ್ಲಿ ಇಂದು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜಧಾನಿ ಬೆಂಗಳೂರಿನಲ್ಲಿಂದು ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ವೇಳೆಗೆ ಹಗುರ ಮಳೆಯಾಗುವ ಸಾಧ್ಯತೆಗಳಿವೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಒಣಹವೆ ಇರಲಿದ್ದು, ಮಳೆ ಇಳಿಕೆಯಾದ ಕಾರಣ ಜಲಾಶಯಗಳ ಒಳ ಹರಿವು ಸಹ ಇಳಿಮುಖವಾಗುತ್ತಿದೆ ಎಂದು ತಿಳಿದು ಬಂದಿದೆ.
*ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ಗಳಲ್ಲಿ)*
ಬೆಂಗಳೂರು 30-19, ಉತ್ತರ ಕನ್ನಡ 29-25, ಬೆಳಗಾವಿ 25-21, ಶಿವಮೊಗ್ಗ 28-21, ಚಿಕ್ಕಮಗಳೂರು 25-18, ಬಾಗಲಕೋಟೆ 31-23, ವಿಜಯಪುರ 30-22 ರಾಯಚೂರು 33-23, ಕೊಪ್ಪಳ 31-22, ಕಲಬುರಗಿ 31-23, ಬೀದರ್ 28-22, ಗದಗ 29-22, ಬಳ್ಳಾರಿ 33-23, ಯಾದಗಿರಿ 32-23, ಚಾಮರಾಜನಗರ 32-21, ಧಾರವಾಡ 27-21, ಮೈಸೂರು 31-21, ಚಿಕ್ಕಬಳ್ಳಾಪುರ 31-20, ಕೋಲಾರ 32-21, ಬೆಂಗಳೂರು ಗ್ರಾಮಾಂತರ 30-19, ತುಮಕೂರು 31-20, ಚಿತ್ರದುರ್ಗ 29-21, ಹಾವೇರಿ 28-22, ದಾವಣಗೆರೆ 29-22, ಹುಬ್ಬಳ್ಳಿ 28-22, ರಾಮನಗರ 31-21, ಮಂಡ್ಯ 32-21 ಮಡಿಕೇರಿ 21-17, ಹಾಸನ 26-19, ದಕ್ಷಿಣ ಕನ್ನಡ 29-24, ಉಡುಪಿ 29-24 ಇದೆ.