BREAKING : ಮರ್ಯಾದಾ ಹತ್ಯೆ : ಕತ್ತು ಕೊಯ್ದು ಮಗಳನ್ನೇ ಕೊಂದ ತಂದೆ..!!

You are currently viewing BREAKING : ಮರ್ಯಾದಾ ಹತ್ಯೆ : ಕತ್ತು ಕೊಯ್ದು ಮಗಳನ್ನೇ ಕೊಂದ ತಂದೆ..!!

ಬೆಂಗಳೂರು : ಇತ್ತೀಚೆಗೆ ರಾಜ್ಯದಲ್ಲಿ ಹೆಚ್ಚುತ್ತಿರುವ ಮರ್ಯಾದಾ ಹತ್ಯೆಗಳು, ಇಂದು ಅನ್ಯ ಜಾತಿಯ ಹುಡುಗನೊಂದಿಗೆ ಸಂಬಂಧ ಹೊಂದಿದ್ದಕ್ಕೆ ತಂದೆಯೇ ಮಗಳನ್ನ ಕೊಂದಿರುವ ದುರಂತ ಘಟನೆ ರಾಜಧಾನಿಯಲ್ಲಿ ನಡೆದಿದೆ. ಸಿಲಿಕಾನ್ ಸಿಟಿ ಹೊರವಲಯ ದೇವನಹಳ್ಳಿ ಸಮೀಪದ ಬಿದಲೂರು ಗ್ರಾಮದ ನಿವಾಸಿ ಕಾಲೇಜು ವಿದ್ಯಾರ್ಥಿನಿ ಕವನ (20) ಮೃತ ವಿದ್ಯಾರ್ಥಿನಿ ಎಂದು ತಿಳಿದು ಬಂದಿದೆ. ಪೊಲೀಸರ ಪ್ರಕಾರ, ಆರೋಪಿ ಮಂಜುನಾಥ್ ತನ್ನ ಮಗಳ ಸಂಬಂಧದ ಬಗ್ಗೆ ತಿಳಿದ ಬಳಿಕ ವಿಚಲಿತನಾಗಿದ್ದ ಮತ್ತು ಹುಡುಗ ಬೇರೆ ಜಾತಿಗೆ ಸೇರಿದವನು ಎಂದು ತಿಳಿದಾಗ ಆತನ ಕೋಪ ತೀವ್ರಗೊಂಡಿತ್ತು.

ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ತಂದೆ ಮಂಜುನಾಥ್ ಎಂಬಾತ ತನ್ನ ಸಂಬಂಧವನ್ನು ಮುಂದುವರಿಸದಂತೆ ಮಗಳು ಕವನಾಗೆ ಎಚ್ಚರಿಕೆ ನೀಡಿದ್ದನು ಎಂದು ಹೇಳಲಾಗಿದೆ. ಆದ್ರೆ, ಆಕೆ ತನ್ನ ತಂದೆಯ ಮಾತನ್ನು ಕೇಳಲಿಲ್ಲ ಎಂದು ಪೊಲೀಸರಿಂದ ಮಾಹಿತಿ ಲಭ್ಯವಾಗಿದೆ. ಬುಧವಾರ ರಾತ್ರಿ ತಂದೆ-ಮಗಳ ನಡುವೆ ವಾಗ್ವಾದ ನಡೆದಿದ್ದು, ಇದರಿಂದ ವಿಚಲಿತಗೊಂಡ ಮಂಜುನಾಥ್ ಚಾಕುವಿನಿಂದ ಕವನಾಳ ಕತ್ತು ಸೀಳಿ ಕಾಲು ಮತ್ತು ಕೈಗಳಿಗೆ ಹಲವು ಬಾರಿ ಇರಿದಿದ್ದಾನೆ. ಈ ಪರಿಣಾಮ ಅವಳು ಸ್ಥಳದಲ್ಲೇ ಮೃತ ಪಟ್ಟಿದ್ದಾಳೆ.

ಕೊಲೆ ಮಾಡಿ ಬಳಿಕ ಆರೋಪಿ ವಿಶ್ವನಾಥಪುರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಮೂಲಗಳ ಪ್ರಕಾರ, ಮಂಜುನಾಥ್ ಅವರ ಕಿರಿಯ ಮಗಳು ತನ್ನ ಸಂಬಂಧದ ವಿರುದ್ಧದ ವಿರೋಧದ ಬಗ್ಗೆ ಪೊಲೀಸರನ್ನ ಸಂಪರ್ಕಿಸಿದ್ದಳು ಎನ್ನಲಾಗಿದೆ. ಕಳೆದ ವಾರ, ಆಕೆ ಸರ್ಕಾರಿ ವೀಕ್ಷಣಾ ಗೃಹಕ್ಕೆ ಹೋಗಿದ್ದು, ಯಾವುದೇ ವೆಚ್ಚದಲ್ಲಿ ತನ್ನ ಸಂಗಾತಿಯನ್ನ ಮದುವೆಯಾಗುವುದಾಗಿ ಸಮರ್ಥಿಸಿಕೊಂಡಿದ್ದಳು ಎಂದು ಸ್ಥಳಿಯ ಮೂಲಗಳು ತಿಳಿಸಿವೆ.

Leave a Reply

error: Content is protected !!