ಕುಕನೂರು : ತಾಲೂಕಿನ ಬನ್ನಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ಮಹರ್ಷಿ ವಾಲ್ಮೀಕಿ ಜಯಂತಿಯ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ನಾಗರಾಜ್ ವೆಂಕಟಾಪುರ ಮಾತನಾಡಿ ಮಹರ್ಷಿ ವಾಲ್ಮೀಕಿಯರನ್ನು ಆದಿಕವಿ ಎಂದು ಕರೆಯಲಾಗುತ್ತದೆ. ಅವರು ಬರೆದ ರಾಮಾಯಣ ಎಂಬ ಮಹಾ ಗ್ರಂಥವು ಒಂದು ಇತಿಹಾಸ ಪ್ರಸಿದ್ಧ ಗ್ರಂಥವಾಗಿದೆ. ಇವರು ಬರೆದ ಗ್ರಂಥದಿಂದಲೇ ಶ್ರೀ ರಾಮನ ಕಾಲದ ದರ್ಶನವಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವೀರಪ್ಪ ವಿರೂಪಾಕ್ಷಪ್ಪ ಗೊಂದಿ, ಸದಸ್ಯರಾದ ಮಹೇಶ್ ತಳವಾರ, ಸಿದ್ದಣ್ಣ ಜೀವಣ್ಣವರು, ಜಗನ್ನಾಥ್ ಗಡ್ಡದ, ಹನುಮಪ್ಪ ಆಲೂರು, ಸೋಮಣ್ಣ ಆಲೂರು, ವಿಜಯಲಕ್ಷ್ಮಿ ಯರಾಶಿ, ರಮೇಶ್ ತಳವಾರ, ಹಾಗೂ ಗ್ರಾಮಸ್ಥರಾದ. ಸಿದ್ದಪ್ಪ ಗಾವರಾಳ, ಕರಿಯಪ್ಪ ಅಡವಳ್ಳಿ. ಮುತ್ತಪ್ಪ ಗೊಂಡಬಾಳ, ಯಲ್ಲಪ್ಪ ಕಂಪನಾಯಕ, ಅಬ್ದುಲ್ ಸಾಬ್ ಬೆಟಿಗೇರಿ, ಇಮಾಮ್ ಸಾಬ್ ಬೆಟಿಗೇರಿ, ನಾರಾಯಣ್ ವೀರಾಪುರ, ರಂಗಪ್ಪ ಗುತ್ತೂರ, ರವಿ ಬಳ್ಳಾರಿ, ರವಿ ಕಂಪನಾಯಕ, ದೇವರಾಜ್ ನಡುಮನಿ ಅನ್ವರ್ ನದಾಫ್ ಹಾಗೂ ಇತರರಿದ್ದರು.