ಸಾಹಿತ್ಯ, ಧಾರ್ಮಿಕ, ಶಿಕ್ಷಣ ಕ್ಷೇತ್ರಕ್ಕೆ ಮುಂಡರಗಿ ಮಠದ ಸೇವೆ ಅಪಾರ-ಮುಂಡರಗಿಯ ನಾಡೋಜ ಶ್ರೀ.
ಕುಕನೂರ ನ : ಸಾಹಿತ್ಯಿಕವಾಗಿ, ಧಾರ್ಮಿಕವಾಗಿ ಮತ್ತು ಶೈಕ್ಷಣಿಕವಾಗಿ ಸೇವೆ ಸಲ್ಲಿಸಿದ ಹಲವಾರು ಮಠಗಳ ಜೊತೆಗೆ ಮುಂಡರಗಿ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠ ನೂರಾರು ಎಕರೆಗಿಂತ ಹೆಚ್ಚು ಭೂ ದಾನವನ್ನ ಸಮಾಜಕ್ಕೆ ನೀಡಿದ ಶ್ರೇಯಸ್ಸು ಶ್ರೀಮಠಕ್ಕೆ ಸಲ್ಲುತ್ತದೆ ಎಂದು ಮುಂಡರಗಿಯ ಶ್ರೀ ಮ ನಿ ಪ್ರ ಜಗದ್ಗುರು ಡಾ ನಾಡೋಜ ಅನ್ನದಾನೀಶ್ವರ ಮಹಾಶಿವಯೋಗಿಗಳು ಹೆಳಿದರು.
ಅವರು ಕುಕನೂರ ತಾಲೂಕಿನ ತಳಕಲ್ಲ ಗ್ರಾಮದಲ್ಲಿ ಮುಂಡರಗಿ ಶ್ರೀ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದ ಶ್ರೀ ಶಾಖಾಮಠ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡುತ್ತಾ ತಲಕಲ್ಲ ಗ್ರಾಮದ ಭಕ್ತರು ಹೃದಯವಂತರು, ಧಾನ ದರ್ಮಗಳ ಗುಣಗಳನ್ನ ಅಳವಡಿಸಿಕೊಂಡು ಸಮಾಜಮುಖಿ ಬದುಕನ್ನ ಸಾಗಿಸುತ್ತಿದ್ದಾರೆ ಇಂತಹ ಭಕ್ತರಿಗೆ ನಮ್ಮ ಮಠದ ನಾಲ್ಕು ಎಕರೆ ಭೂದಾನ ಮಾಡಿದ್ದು ಅದರಲ್ಲಿ ೧೦ ಗುಂಟೆ ಜಾಗದಲ್ಲಿ ಕುಕನೂರ ಶ್ರೀಗಳ ನೇತೃತ್ವದಲ್ಲಿ ಶಾಖಾಮಠ ನಿರ್ಮಾಣ ಮಾಡಿರುವುದು ಅತ್ಯಂತ್ಯ ಸಂತೋಷ ತಂದಿದೆ, ಕುಕನೂರ ಶ್ರೀಗಳ ಕಾರ್ಯ ಶ್ಲಾಘನೀಯ ಎಂದರು.
ಲಿಂಗನಾಯ್ಕನಹಳ್ಳಿ ಶ್ರೀ ಮ ನಿ ಪ್ರ ಚನ್ನವೀರ ಮಹಾಸ್ವಾಮಿಗಳು ಮಾತನಾಡಿ ಮುಂಡರಗಿ ಮಠಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ, ಅಂತಹ ಪರಂಪರೆವುಳ್ಳ ಮಠದ ಶಾಖಾಮಠವನ್ನ ಇಲ್ಲಿ ಸ್ಥಾಪಿಸಿರುವುದು ಸೂಕ್ತ, ಮಠಗಳ ಮತ್ತು ಗುರುಗಳ ನಿತ್ಯ ದರ್ಶನದಿಂದ ಮನುಷ್ಯ ಸಂಸ್ಕಾರವAತನಾಗಲು ಸಾಧ್ಯವಾಗುತ್ತದೆ, ವಿಶೇಷವಾಗಿ ಈ ಎಲ್ಲಾ ಕಾರ್ಯಕ್ಕೂ ಕಾರಣೀಭೂತರಾದ ಕುಕನೂರಿನ ಪೂಜ್ಯ ಮಹಾದೇವ ಮಹಾಸ್ವಾಮಿಗಳು ತಮ್ಮ ಹೆಸರನ್ನಾಗಲಿ, ಭಾವಚಿತ್ರವನ್ನಾಗಲಿ ಆಮಂತ್ರಣ ಪತ್ರಿಕೆ, ಬ್ಯಾನರಗಳಲ್ಲಿ ಹಾಕದೆ ಹೃದಯವಂತಿಕೆ ಮೆರೆದಿದ್ದಾರೆ, ಎಲ್ಲಾದಕ್ಕೂ ಅನ್ನದಾನೀಶ್ವರ ಕೃಪೆ ಕಾರಣ ಎಂಬ ಅವರ ಗುರು ಭಕ್ತಿ ದೊಡ್ಡದು ಎಂದರು.
ನೀಲಗುಂದ ಶ್ರೀ ಮ ನಿ ಪ್ರ ಚನ್ನಬಸವ ಮಹಾಸ್ವಾಮಿಗಳು ಮಾತನಾಡಿ ಭಕ್ತರು ದುಶ್ಚಟಗಳ ಮುಕ್ತರಾಗಬೇಕು, ಮಠಗಳು ಭಕ್ತರಿಂದ ದಾನ ಧರ್ಮಕ್ಕಿಂತ ಅವರು ಉತ್ತಮ ಬದುಕು ನಡೆಸುವುದನ್ನ ನೋಡಲು ಇಷ್ಟ ಪಡುತ್ತವೆ, ಭಕ್ತರನ್ನ ಸುಖವಾಗಿಡುವುದೇ ಮಠಗಳ ಕಾರ್ಯ ಎಂದರು.
ಬ್ರಾಹ್ಮೀ ಮೂಹೂರ್ತದಲ್ಲಿ ಗದ್ದುಗೆ ಸ್ಥಾಪನ ಕಾರ್ಯವನ್ನ ಮೈನಹಳ್ಳಿ ಶ್ರೀಗಳು, ಕಂಪ್ಲಿ ಶ್ರೀಗಳು ಮತ್ತು ಸೂರಟೂರಿನ ಶ್ರೀಗಳು ನೇರವೇರಿಸಿದರು. ನಂತರ ಪೂರ್ಣಕುಂಬಾದೋ0ದಿಗೆ ಎಲ್ಲಾ ಪೂಜ್ಯರನ್ನ ಗ್ರಾಮಕ್ಕೆ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಶಾಖಾಮಠದ ಉದ್ಘಾಟನಾ ಅಂಗವಾಗಿ ಐದು ದಿನಗಳ ಪ್ರವಚನ ಸೇವೆಯನ್ನ ಉಮಾಪತಿ ಶಾಸ್ತಿಗಳು, ಅಕ್ಕಮಹಾದೇವಿ ರಾಜೂರು, ಮಲ್ಲಿಕಾರ್ಜುನ ತಳಕಲ್, ಬಸಯ್ಯ ಚಂಡೂರಮಠ ಮತ್ತು ವೀರಭದ್ರಪ್ಪ ಸುಂಕದ ನೇರವೇರಿಸಿದರು, ಪ್ರಾಸ್ತವಿಕವಾಗಿ ಮಠದ ಪರಂಪರೆಯನ್ನ ನಿವೃತ್ತ ಪ್ರಾಧ್ಯಪಕರಾದ ಆರ್ ಎಲ್ ಪೋಲಿಸ ಪಾಟೀಲ ಮಾತನಾಡಿದರು.
ಕಾರ್ಯಕ್ರಮದಲ್ಲಿ ಯಲಬುರ್ಗಾ ಮುರಡಿ ಮಠದ ಶ್ರೀಗಳು, ಮಂಗಳೂರಿನ ಶ್ರೀಗಳು, ಹಿರೇಸಿಂದೋಗಿ ಶ್ರೀಗಳು, ನರಸಾಪುರ ಶ್ರೀಗಳು, ಬೆದವಟ್ಟಿ ಶ್ರೀಗಳು, ಹಿರೇಮಲ್ಲಿನಕೇರಿ ಶ್ರೀಗಳು, ಹಡಗಲಿ ಶ್ರೀಗಳು, ಇಟಗಿ ಶ್ರೀಗಳು ಸೇರಿದಂತೆ ಎಲ್ಲಾ ಪೂಜ್ಯರಿಗೂ ಕುಕನೂರ ಶ್ರೀಗಳು ತಳಕಲ್ಲ ಸದ್ಬಕ್ತರ ಪರವಾಗಿ ಸನ್ಮಾನ ಮಾಡಿ ಗೌರವಿಸಿದರು. ಈ ಸಂದರ್ಭದಲ್ಲಿ ತಳಕಲ್ಲ ಮತ್ತು ಸುತ್ತಮುತ್ತಲಿ ಗ್ರಾಮಗಳ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಸದ್ಬಕ್ತರು ಕಾರ್ಯಕ್ರಮಕ್ಕೆ ಮೇರಗು ತಂದರು.