REPUBLIC DAY : 75ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿ ನಮ್ಮ ಭಾರತ : ಇಲ್ಲಿದೆ ಸಂಕ್ಷಿಪ್ತ ಮಾಹಿತಿ..!

You are currently viewing REPUBLIC DAY : 75ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿ ನಮ್ಮ ಭಾರತ : ಇಲ್ಲಿದೆ ಸಂಕ್ಷಿಪ್ತ ಮಾಹಿತಿ..!

ವರದಿ : ಚಂದ್ರು ಆರ್ ಭಾನಾಪೂರ್

ದೇಶದಲ್ಲಿ ಇದೀಗ 75ನೇ ವರ್ಷದ ಗಣರಾಜ್ಯೋತ್ಸವದ ಸಂಭ್ರಮ. ಈ ಬಾರಿಯ ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ದೇಶಾದ್ಯಂತ ಸಕಲ ಸಿದ್ಧತೆಗಳು ನಡೆದಿದೆ. ಗಣರಾಜ್ಯೋತ್ಸವದ ಪರೇಡ್ ಮತ್ತು ಬೀಟಿಂಗ್ ದಿ ರಿಟ್ರೀಟ್ ಸಮಾರಂಭಗಳನ್ನು ಈಗಾಗಲೇ ಎಲ್ಲಾ ಭಾರತೀಯ ರಾಜ್ಯಗಳ ರಾಜಧಾನಿಗಳಲ್ಲಿ ಸಂಪೂರ್ಣ ತಯಾರಾಗಿದ್ದಾರೆ. ಜನವರಿ 26 ರಂದು ಗಣರಾಜ್ಯೋತ್ಸವ ದಿನವನ್ನು ಬಹಳ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ಈ ದಿನ ಖಂಡಿತ ಪ್ರತಿಯೊಬ್ಬ ಭಾರತೀಯರಿಗೆ ಹೆಮ್ಮೆಯ ದಿನವಾಗಿದೆ ಹಾಗೂ ಇದರ ಬಗ್ಗೆ ಪ್ರತಿಯೊಬ್ಬ ಭಾರತೀಯನೂ ತಿಳಿದುಕೊಳ್ಳಬೇಕು.

ಗಣರಾಜ್ಯೋತ್ಸದ ಇತಿಹಾಸ ಮತ್ತು ಮಹತ್ವ:

ಗಣರಾಜ್ಯೋತ್ಸವವು ಜನವರಿ 26, 1950 ರಂದು ಭಾರತದ ಸಂವಿಧಾನದ ಅಂಗೀಕಾರವನ್ನು ಮೇಲಕು ಹಾಕಲಾಗುತ್ತದೆ. ಭಾರತವು 1947ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಪಡೆದ ಬಳಿಕ ಅಂದರೆ ಜನವರಿ 26, 1950ರಲ್ಲಿ ಸಂವಿಧಾನವನ್ನು ಜಾರಿಗೆ ಬಂದಿತು. ಅಂದಿನಿಂದ ರಾಜ ಪ್ರಭುತ್ವವನ್ನು ತ್ಯಜಿಸಿ ಪ್ರಜಾಪ್ರಭುತ್ವದ ಕಡೆಗೆ ಬರಲಾಯಿತು. ಅಂದರೆ ಸಾರ್ವಭೌಮ ದೇಶವಾಯಿತು. ಈ ಸುಸಂದರ್ಭವನ್ನು “ಗಣರಾಜ್ಯ” ಎಂದು ಘೋಷಿಸಿ ಅಂದಿನಿಂದ ಇಂದಿನವರೆಗೆ “ಜನವರಿ 26” ಅನ್ನು “ರಿಪಬ್ಲಿಕ್‌ ಡೇ” “ಗಣರಾಜ್ಯೋತ್ಸವ” ಎಂದು ಆಚರಿಸಲಾಗುತ್ತದೆ.

ಸಂವಿಧಾನ ಸಭೆಯು ತನ್ನ ಮೊದಲ ಅಧಿವೇಶನವನ್ನು ಡಿಸೆಂಬರ್ 9, 1946 ರಂದು ಹಾಗೂ ಕೊನೆಯ ಅಧಿವೇಶನವನ್ನು ನವೆಂಬರ್ 26, 1949 ರಂದು ನಡೆಸಿತು. ಆದಾದ ಮೇಲೆ ಒಂದು ವರ್ಷದ ಬಳಿಕ ಸಂವಿಧಾನವನ್ನು ಅಂಗೀಕರಿಸಲಾಯಿತು. ಭಾರತ ರತ್ನ ಡಾ ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಕರಡು ಸಮಿತಿಯ ನೇತೃತ್ವ ವಹಿಸಿದ್ದರು. ಸಂವಿಧಾನ ಶಿಲ್ಪಿ ಡಾ.ಬಿ ಆರ್​ ಅಂಬೇಡ್ಕರ್​ರ ಸವಿನೆನಪಿಗಾಗಿ ಭಾರತವು ಪ್ರತಿ ವರ್ಷ ನವೆಂಬರ್​ 26ರಂದು ಸಂವಿಧಾನ ದಿನವನ್ನು ಆಚರಿಸಲಾಗುತ್ತಿದೆ.

“ಜನವರಿ 26ರಂದೇ ಆಚರಣೆ”

1929 ರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ, “ಪೂರ್ಣ ಸ್ವರಾಜ್ ಘೋಷಣೆ” ಅಥವಾ “ಭಾರತದ ಸ್ವಾತಂತ್ರ್ಯದ ಘೋಷಣೆ” ಯನ್ನು ಘೋಷಿಸಲಾಯಿತು, 26 ಜನವರಿಯನ್ನು 1930 ರಲ್ಲಿ ಸ್ವಾತಂತ್ರ್ಯ ದಿನವೆಂದು ಘೋಷಿಸಲಾಯಿತು. ಆದರೆ, ಈ 1947ರ ವರೆಗೂ ಈಡೇರಲಿಲ್ಲ. ನಂತರ ಸ್ವಾತಂತ್ರ್ಯ ಸಿಕ್ಕು ಸಂವಿಧಾನ ಜಾರಿ ಮಾಡುವ ವೇಳೆಯಲ್ಲಿ ಹಳೆಯ ನಿರ್ಣಯದಂತೆ “ಜನವರಿ 26”ಅನ್ನು ಆಯ್ಕೆ ಮಾಡಿಕೊಂಡು ಸಂವಿಧಾನವನ್ನು ಜಾರಿಗೊಳಿಸಲಾಯಿತು. ಅಂದಿನಿಂದ ದೇಶ ಗಣರಾಜ್ಯವಾಗಿ ಹೊರಹೊಮ್ಮಿ ಅಂದಿನಿಂದ ಅದ್ಧೂರಿಯಾಗಿ ಆಚರಿಕೊಂಡು ಬರಲಾಗುತ್ತಿದೆ.

ಗಣರಾಜ್ಯೋತ್ಸವ ಮಹತ್ವದ ಆಚರಣೆಗಳು

ದೇಶದಲ್ಲಿ ಗಣರಾಜ್ಯೋತ್ಸವವನ್ನು ಅದ್ಧೂರಿ ಹಾಗೂ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನದಂದು, ರಾಷ್ಟ್ರಪತಿ ರಾಷ್ಟ್ರಧ್ವಜವನ್ನು ಹಾರಿಸುತ್ತಾರೆ ಮತ್ತು ಬಳಿಕ ಅದ್ಭುತವಾದ ಮಿಲಿಟರಿ ಮತ್ತು ಸಾಂಸ್ಕೃತಿಕ ವೈಭವವನ್ನು ಪ್ರದರ್ಶಿಸುತ್ತಾರೆ. ಹಾಗೆಯೇ ಭಾರತದ ರಾಷ್ಟ್ರಪತಿಗಳು ದೇಶದ ಅರ್ಹ ನಾಗರಿಕರಿಗೆ ಪದ್ಮ ಪ್ರಶಸ್ತಿಗಳನ್ನು ವಿತರಿಸುತ್ತಾರೆ ಮತ್ತು ವೀರ ಸೈನಿಕರಿಗೆ ಪರಮವೀರ ಚಕ್ರ, ಅಶೋಕ ಚಕ್ರ ಮತ್ತು ವೀರ ಚಕ್ರವನ್ನು ನೀಡಲಾಗುತ್ತದೆ.

“ಮೆರವಣಿಗೆ ವೇಳೆ ಮತ್ತು ಈ ವರ್ಷದ ಥೀಮ್”

ಗಣರಾಜ್ಯೋತ್ಸವ 2024ರ ಪರೇಡ್ ಥೀಮ್ “ವಿಕ್ಷಿತ್ ಭಾರತ್” ಮತ್ತು “ಭಾರತ್ – ಲೋಕತಂತ್ರ ಕಿ ಮಾತೃಕಾ”, ಇದು ಪ್ರಜಾಪ್ರಭುತ್ವದ ಪೋಷಕರಾಗಿ ಭಾರತದ ಪಾತ್ರವನ್ನು ಒತ್ತಿಹೇಳುತ್ತದೆ ಹಾಗೂ ಜನವರಿ 26 ರಂದು (ಶುಕ್ರವಾರ) ಇಂದು ಬೆಳಿಗ್ಗೆ 10:30 ಕ್ಕೆ ನವದೆಹಲಿಯ ಕರ್ತವ್ಯ ಪಥ್‌ನಲ್ಲಿ ಪ್ರಾರಂಭವಾಗಲಿದೆ. ಮೆರವಣಿಗೆಯಲ್ಲಿ 95-ಸದಸ್ಯ ಮೆರವಣಿಗೆಯ ತುಕಡಿ ಮತ್ತು 33-ಸದಸ್ಯ ಬ್ಯಾಂಡ್ ತುಕಡಿ ಕೂಡ ಇರಲಿದೆ. ಇದು ಸುಮಾರು 90 ನಿಮಿಷಗಳವರೆಗೆ ಈ ಪಥಸಂಚಲನ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಸ್ಥಳವು 77,000 ಆಸನ ಸಾಮರ್ಥ್ಯವನ್ನು ಹೊಂದಿದ್ದು, 42,000 ಆಸನಗಳನ್ನು ಸಾರ್ವಜನಿಕರಿಗೆ ಕಾಯ್ದಿರಿಸಲಾಗಿದೆ ಎಂದು ಮಾಹಿತಿ ಇದೆ. ಗಣರಾಜ್ಯೋತ್ಸವ ಪ್ರಮುಖ ವಿಶೇಷತೆ ಎಂದರೆ ಅತಿಥಿಗಳು. ಹೌದು ಪ್ರತಿವರ್ಷ ಭಾರತವು ವಿದೇಶಿ ಗಣ್ಯರಿಗೆ ಆಹ್ವಾನ ನೀಡುತ್ತದೆ. ಅದರಂತೆ ಈ ವರ್ಷ ಗಣತಂತ್ರ ದಿನಕ್ಕೆ ವಿಶೇಷ ಅತಿಥಿಯಾಗಿ ಫ್ರಾನ್ಸ್​ ಅಧ್ಯಕ್ಷ ಇಮಾನ್ಯುವಲ್​ ಮ್ಯಾಕ್ರನ್​ ಆಗಮಿಸುತ್ತಿದ್ದಾರೆ.

Leave a Reply

error: Content is protected !!