PV ನ್ಯೂಸ್ ಡೆಸ್ಕ್ ಕೊಪ್ಪಳ : ಬರುವ ಆಗಸ್ಟ್ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊಪ್ಪಳ ಜಿಲ್ಲಾ ಪ್ರವಾಸ ನಿಗದಿಯಾಗಿದ್ದು, ಆಗಸ್ಟ್ 6 ರಂದು ತುಂಗಭದ್ರಾ ನದಿಗೆ ಬಾಗೀನ ಅರ್ಪಿಸಲಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಮುಖ್ಯಮಂತ್ರಿಗಳ ಕೊಪ್ಪಳ ಜಿಲ್ಲಾ ಪ್ರವಾಸದ ಬಗ್ಗೆ ಮುಖ್ಯಮಂತ್ರಿಗಳ ಕಚೇರಿ ಮಾಹಿತಿ ಒದಗಿಸಿದೆ.
ತುಂಗಭದ್ರಾ ನದಿಯು ತುಂಬಿ ಹರಿಯುತ್ತಿದ್ದು ರೈತರ ಮೊಗದಲ್ಲಿ ಸಂತಸ ಮನೆ ಮಾಡಿದೆ. ಈಗಾಗಲೇ ತುಂಗಭದ್ರಾ ನದಿಯಿಂದ ನೀರು ಬಿಡಲಾಗುತ್ತಿದೆ. ಎಲ್ಲ ಗೇಟುಗಳು ವಿದ್ಯುತ್ ಅಲಂಕೃತ ದಿಂದ ಸಂಜೆ ಹೊತ್ತಲ್ಲಿ ನೋಡುಗರನ್ನು ಕಂಗೊಳಿಸುತ್ತಿವೆ. ಹೀಗಾಗಿ ಆಗಸ್ಟ್ 6 ರಂದು ರಾಜ್ಯ ಮುಖ್ಯಮಂತ್ರಿ, ಸಚಿವರು ತುಂಗಭದ್ರಾ ನದಿಗೆ ಬಾಗೀನ ಅರ್ಪಿಸಲಿದ್ದಾರೆ ಎಂದು ತಿಳಿದುಬಂದಿದೆ.