BREAKING : ತಾಲೂಕಿನಲ್ಲಿ ಭಯದ ವಾತಾವರಣ ಉಂಟು ಮಾಡಿದ್ದ ಚಿರತೆ ಸೆರೆ..!
ಕುಕನೂರು : ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದ ಕೇಲವು ತಿಂಗಳಿಂದ ಆತಂಕ ಮೂಡಿಸಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಗಾವರಾಳ ಗ್ರಾಮದ ಹೊರವಲಯದಲ್ಲಿ ಇರಿಸಿದ್ದ ಬೋನಿನಲ್ಲಿ ಚಿರತೆ ಇಂದು (ಸೋಮವಾರ-ಫೆಬ್ರವರಿ 17) ಬೆಳಿಗ್ಗೆ ಸೆರೆಯಾಗಿದೆ.
ತಾಲೂಕಿನ ಗಾವರಾಳ ಗ್ರಾಮದ ಹೊರವಲಯದಲ್ಲಿ ಹಲವು ದಿನಗಳಿಂದ ವಾಸವಾಗಿದ್ದ ಚಿರತೆ ಈ ಗ್ರಾಮದ ಸುತ್ತಮೂತ್ತಲೂ ಭಯದ ವಾತಾವರಣ ಉಂಟು ಮಾಡಿತ್ತು, ಇದನ್ನು ಅರಿತ ಅರಣ್ಯ ಇಲಾಖೆ ಸಿಬ್ಬಂದಿಗಳು ಸರಿಯಾದ ಕಾರ್ಯಚರಣೆ ನಡೆಸಿ ಚಿರತೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.