LOCAL NEWS : ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾದ ಲಕ್ಷ್ಮೇಶ್ವರ ಪೊಲೀಸರು..!
ಲಕ್ಷ್ಮೇಶ್ವರ : ಪಟ್ಟಣದ ಗಡ್ಡಯ್ಯ ನಗರ ಮತ್ತು ಉಪನಾಳ ಪಾರ್ಕಿನಲ್ಲಿನ ಮನೆಗಳಲ್ಲಿ ಚಿನ್ನಾಭರಣ ದೋಚಿದ ಕಳ್ಳನನ್ನು ಲಕ್ಷ್ಮೇಶ್ವರ ಠಾಣೆಯ ಪೊಲೀಸರು ಬನ್ನಿಸಲಾಗಿದ್ದು ಆತನಿಂದ 60,000 ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 100 ಗ್ರಾಂ ಬೆಳ್ಳಿ ಹಾಗೂ ಒಂದು ಎಣ್ಣೆ ಪಂಪು ಚಾರ್ಜರ್ ಬ್ಯಾಟರಿ ವಶಕ್ಕೆ ಪಡೆಯಲಾಗಿದೆ.
ಜಿಲ್ಲೆಯ ಎಸ್ ಪಿ ಹೆಚ್ಚುವರಿ ಪೋಲಿಸ್ ಡಿ ಎಸ್ ಪಿ ಸಿಪಿಐ ನಾಗರಾಜ್ ಮಾಡಳ್ಳಿ, ಮಾರ್ಗದರ್ಶನದಲ್ಲಿ ಹಾಗೂ ಪಿಎಸ್ಐ ನಾಗರಾಜ ಗಡ್ಡದ, ಕ್ರೈಂ ಪಿಎಸ್ಐ ಟಿ ಕೆ ರಾಠೋಡ್, ಲಕ್ಷ್ಮೇಶ್ವರ ಪಟ್ಟಣದ ಪೊಲೀಸರು ಆರೋಪಿ ಪ್ರೇಮ ಗದ್ದಿ ವಯಸ್ಸು 27 ವರ್ಷದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಎಸ್ಐ ಮೌಲ್ವಿ, ಎಂ ಎ ಶೇಕ್, ಎ ಆರ್ ಕಮ್ಮಾರ್, ಆರ್ ಎಸ್ ಯರಗಟ್ಟಿ, ಗುರು ಬೂದಿಹಾಳ, ಸಿ ಎಸ್ ಮಠಪತಿ, ಎಚ್ಎ ಕಲ್ಲಣ್ಣವರ್, ಪಾಂಡುರಂಗರಾವ್, ನಂದಯ್ಯ ಮಠಪತಿ, ಸಂಜೀವ್ ಕೊರಡೂರ, ತಂಡವನ್ನು ರಚನೆ ಮಾಡಿ ಕಳ್ಳನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.