LOCAL NEWS : ಕುಕನೂರು ಪಿಎಸ್ಐ ಟಿ.ಗುರುರಾಜ್ ಅವರಿಗೆ ಪೊಲೀಸ್ ಮಹಾ ನಿರೀಕ್ಷಕರಿಂದ ಅತ್ಯುತ್ತಮ ಪ್ರಶಂಸನ ಪತ್ರ..!!
ಕುಕನೂರ : ಕುಕನೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ಟಿ.ಗುರುರಾಜ್ ಅವರಿಗೆ ಅಪರಾಧ ಪ್ರಕರಣಗಳಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸಲುವಾಗಿ ಬಳ್ಳಾರಿ ವಲಯದ ಪೊಲೀಸ್ ಮಹಾ ನಿರೀಕ್ಷಕರಿಂದ ಅತ್ಯುತ್ತಮ ಪ್ರಶಂಸನ ಪತ್ರ ನೀಡಲಾಗಿದೆ.
ನಿನ್ನೆ (ಡಿ.20ರಂದು) ಕೊಪ್ಪಳ ಜಿಲ್ಲಾ ಪೊಲೀಸ್ ಕಾರ್ಯಾಲಯದಲ್ಲಿ ಬಿ.ಎಸ್. ಲೋಕೇಶ ಕುಮಾರ ಐ.ಪಿ.ಎಸ್. ಪೊಲೀಸ್ ಮಹಾ ನಿರೀಕ್ಷಕರು, ಬಳ್ಳಾರಿ ವಲಯ ರವರು ಉತ್ತಮ ಕೆಲಸ ನಿರ್ವಹಿಸಿದ ಕುಕನೂರ ಪೊಲೀಸ್ ಠಾಣೆಯ ಪಿಎಸ್ಐ ಟಿ. ಗುರುರಾಜ್ ಸೇರಿ ಅಪರಾಧ ಪ್ರಕರಣಗಳಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಣೆಗಾಗಿ ಮತ್ತು ಈ ಆರ್ ಎಸ್ ಎಸ್ ಸಿಬ್ಬಂದಿಗಳಿಗೆ ಪ್ರಶಂಸನ ಪತ್ರ ನೀಡಿದ್ದಾರೆ.